Posts

Showing posts from 2008

Voice of Kannada

Image
ಕನ್ನಡ ಬಾರದಿರುವವರಿಗೂ ಓದಲು ಅನುಕೂಲವಾಗಲಿ ಎಂದು ಈ ಲೇಖನವನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆದಿರುವೆ. November 1st is a special occasion for KANNADIGAS as it is on this day that our state came into being. KARNATAKA was formed on 1st November 1956 when Government of India decided to form linguistic states. Today with great pain and anguish I share my feelings on what is happening in KARNATAKA to the aboriginals of KARNATAKA in the recent past. I have been noticing that many of our fellow KANNADIGAS don’t use proper KANNADA and are unaware of the common KANNADA words. They find it difficult to converse in KANNADA and they are so much inclined towards other languages that, they have totally forgotten their regional language. A Maharashtrian succeeds in teaching a non maharashtrian MARATHI, but a KANNADIGA fails or never bothers to teach KANNADA to non kannadigas. WHY IS THIS? I stress that if people try to speak with you in any language other than KANNADA or HINDI, reply in KANNADA only, even if they don`t

Nano Stories...

Nano Stories....ಇದು ನನ್ನ ಹೊಸ ಪ್ರಯೋಗ. These are very short stories with a twist at the end. (Not to make you feel bored) ನಾ ಬರೆದ ಕೆಲವು Nano ಕಥೆಗಳ ಸಂಗ್ರಹ ಇಲ್ಲಿವೆ.

ನಂಬಿಕೆ.

Image
ಮೊದಲ ಪರೀಕ್ಷೆ ಬರೆದು ಮನೆಗೆ ಬಂದ ಚಿಂಟು, US returned ಚಿಕ್ಕಪ್ಪನ ಕಂಡು ಖುಷಿಯಿಂದ ಕುಣಿದಾಡಿದ. ಆವರ ಕೈಯ್ಯಲ್ಲಿದ್ದ Gift Box ನೋಡಿ, ಅದು ಅವರು ತನಗಾಗಿ ತಂದಿರುವ Video Game ಅಂದುಕೊಂಡು, ಅದನ್ನು ತೆರೆಯಲು ಹೋದ. ಅಷ್ಟರಲ್ಲಿ ಅವರಮ್ಮ, ಉಳಿದ 5 ಪರೀಕ್ಷೆಗಳಾದ ನಂತರವೇ ನೀನದನ್ನು ನೋಡಬೇಕು ಎಂದಾಗ, ಚಿಂಟುವಿಗೆ ಬೇಸರದ ಜೊತೆ ಅಮ್ಮನ ಮೇಲೆ ಕೋಪವೂ ಬಂತು. ಅಮ್ಮ ತಂದಿತ್ತ ದೋಸೆಯನ್ನು ತಿನ್ನುತ್ತಿದ್ದಾಗಲೇ, ಚಿಂಟುವಿನ ಸ್ನೇಹಿತ ಗುಂಡ "ಬಾರೋ ಚಿಂಟು Group Studies ಮಾಡೋಣ" ಎಂದು ಕರೆದ. ಚಿಂಟುವಿನ ಅಮ್ಮ "ನಾಳೆ Science Exam ಇದೆ, ತರಲೆ ಮಾಡದೆ, ಓದಿ ರಾತ್ರಿ 9ಕ್ಕೆ ಮನೆಗೆ ಬಾ. ಊಟ ಮಾಡಿ ಮಲಗುವೆಯಂತೆ" ಎಂದರು. "ಹೂಂ" ಎಂದು ತಲೆಯಾಡಿಸಿದ ಚಿಂಟು, ಗುಂಡನ ಮನೆಗೆ ಹೋಗಿ, ಅಲ್ಲಿ ಅವನ ಜೊತೆ "Spider Man" ಆಡುವಲ್ಲಿ ನಿರತನಾದ.

ಹತಾಶೆ.

Image
March 31ರಂದು, ಕಿಕ್ಕಿರಿದ ಬಸ್ಸಿನಿಂದ ಹೇಗೋ ಕಷ್ಟಪಟ್ಟು ತನ್ನ ಸ್ಟಾಪ್ ಬಂದಾಗ ಕೆಳಗಿಳಿದ ಸರ್ಕಾರಿ ನೌಕರ ರಮೇಶನ ಗಮನಕ್ಕೆ ಮೊದಲು ಬಂದದ್ದು, ತನ್ನ ಕಿತ್ತುಹೋದ ಚಪ್ಪಲಿ. ಅಲ್ಲಿಯೆ ಹತ್ತಿರದಲ್ಲಿದ್ದ ಚಮ್ಮಾರನ ಅಂಗಡಿ ಕಾಣಿಸಿದಾಗ, ಮೊಗದಲ್ಲಿ ಮೂಡಿದ ಮಂದಹಾಸ ಹತಾಶೆಗೆ ಪರಿವರ್ತನೆಯಾಗಿದ್ದು, ಚಿಲ್ಲರೆ ತೆಗೆಯಲು ಜೇಬಿಗೆ ಕೈ ಹಾಕಿ, Pickpocket ಆಗಿದೆ ಎಂದು ಗೊತ್ತಾದಾಗ.

ಕಣ್ಮರೆ.

ವಠಾರದಲ್ಲಿ "ರಸಿಕ ರಾಜ" ನೆಂದೇ ಪ್ರಸಿದ್ದನಾಗಿದ್ದ ವೆಂಕಿ, ಸ್ನೇಹಿತರೊಂದಿಗೆ ಕಾಫಿಗಾಗಿ, For a change, ರಸ್ತೆ ಬದಿಯಲ್ಲಿದ್ದ "Upahaara Saagara" ದ ಬದಲು, ಹಿಂಬದಿಯ ರಸ್ತೆಯ "Coffee Day"ಗೆ ಹೋದ. ಆಲ್ಲಿ ಕಾಫಿಯನ್ನು ಆಸ್ವಾದಿಸಿದ ಎಲ್ಲರೂ, ವಠಾರಕ್ಕೆ ವಾಪಸಾದಾಗ, ವೆಂಕಿ ನಾಪತ್ತೆಯಾಗಿದ್ದ.

ಸಂಜೆ 6 ರ ನಂತರ.

Image
ಸಮಯ 6 ಆಯಿತು, PC ShutDown ಮಾಡಿ, ಮೆಟ್ಟಿಲಿಳಿಯುತ್ತಿದ್ದ ಸುಶ್ಮಳಿಗೆ Receptionನಲ್ಲಿ Project Manager ಧ್ವನಿ ಕೇಳಿಸಿತು. ತಕ್ಷಣ ಅವಳು Cell Phoneನ Switch Off ಮಾಡಿ, Cafeteria ಕಡೆಗೆ ಕಾಲ್ಕಿತ್ತಳು.

ನಿಟ್ಟುಸಿರು.

ತಿರುಗುತ್ತಿದ್ದ Fan,Current ಹೋದ ಕಾರಣ ನಿಂತು ಹೋಯಿತು. Fanನಿನೆಡೆಗೆ ನೋಡಿದ ಶ್ರುತಿ, "ಛೆ! ಆಗಲೇ ನಾ Mobile Chargige ಇಡಬೇಕಿತ್ತು" ಎಂದು ಮನಸ್ಸಿನಲ್ಲೇ ತನ್ನ ಸೋಮಾರಿತನಕೆ ಹಿಡಿಶಾಪ ಹಾಕಿದಳು.ಚೂರು ಬೇಜಾರಿನಲ್ಲಿದ್ದ ಆಕೆ, ಪದೇ ಪದೇ ಫೋನಿನೆಡೆಗೆ ಕಣ್ಣಾಡಿಸುತ್ತಿದಳು. ಅಷ್ಟರಲ್ಲಿ, ಅಮ್ಮ ಊಟಕ್ಕೆ ಬಾ ಎಂದು ಕರೆದಾಗ, ಇಲ್ಲಿ Mobile ರಿಂಗಣಿಸತೊಡಗಿತು. ಭರತನ Call ಇರಬಹುದೇನೋ ಎಂದು Call Receive ಮಾಡುವಷ್ಟರಲ್ಲಿ, Battery ಕೂಡ ಮುಗಿದು, Call Cut ಆಯಿತು. ಇದನ್ನೆಲ್ಲಾ ನೋಡುತ್ತಿದ್ದ ಅಮ್ಮ ನಿಟ್ಟುಸಿರಿಟ್ಟರು.

Nano Stories...

Nano Stories....ಇದು ನನ್ನ ಹೊಸ ಪ್ರಯೋಗ. These are very short stories with a twist at the end. (Not to make you feel bored) ನಾ ಬರೆದ ಕೆಲವು Nano ಕಥೆಗಳ ಸಂಗ್ರಹ ಮೇಲಿವೆ.

ನೆಗಡಿ.

Image
ಕೆಮ್ಮಿದೆ ಗಂಟಲು, ಕಟ್ಟಿದೆ ಮೂಗು, ಶೀತವೊ, ಉಷ್ಣವೊ ಕಾಣೆನು ನಾನು. ಊಟದಿ ರುಚಿಯು ಹತ್ತುತ್ತಿಲ್ಲ, ಅಡುಗೆಯ ವಾಸನೆ ತಿಳಿಯುತ್ತಿಲ್ಲ. ಸೀನಿಗೆ ಸಿಲುಕಿ ನಲುಗಿದೆ ದೇಹ, ಶ್ರದ್ಧೆಯೆ ಇಲ್ಲದೆ ಅಲುಗಿದೆ ಕಾಯ. ಮಾತೇ ಹೊರಡದೆ ಸೊರಗಿದೆ ದನಿಯು, ಕಣ್ಮರೆಯಾಗಿದೆ ಲವಲವಿಕೆಯ ನಗುವು. ಮಾತ್ರೆಯ ನುಂಗಿದೆ, ಕುಡಿದೆ ಕಷಾಯ, ನಿದ್ರೆಯ ಬರಿಸಿದೆ, ಏರಿಸಿ ನಶೆಯ. ಮದ್ದಿನ ಮತ್ತಲಿ ಸಾಗಿದೆ ಜೀವ, ಬರಿ ಮೂರೇ ತಾಸು ಇದರ ಪ್ರಭಾವ. ಪರೀಕ್ಷಿಸಿ ನನ್ನ ಸಂಯಮದಾ ಗಡಿ, ಜೀವವ ಹಿಂಡಿದೆ ಈ ನೆ-ಗಡಿ.

ನೆನಪುಗಳು.

Image
ಬರಿದಾದ ಮನದಲಿ , ಆಲಸ್ಯದ ಮಡುವಲಿ, ಕುಂಟುತ ಬಂದವು ನೆನಪುಗಳು, ನೆನೆಸಲು ಕಳೆದುಹೋದ "ಆ ದಿನಗಳು". ಕೆಲ ಜನಗಳ, ಕೆಲ ಸ್ಥಳಗಳ, ಕೆಲ ಮನಗಳ, ಕೆಲ ದಿನಗಳ, ಸುತ್ತ ಹರಿಹಾಯ್ದವು ಆ ನೆನಪುಗಳು, ಮತ್ತೆ ಕಲ್ಪನೆಯ ಲೋಕವ ವಿಸ್ತರಿಸಲು. ಬೇಡೆನಿಸಿದ ಮಾತುಗಳ ಕೇಳಿಸಿ, ಇಷ್ಟವಾಗದ ಸನ್ನಿವೇಶವ ಬಣ್ಣಿಸಿ, ಮನದಂಗಳದಿ ಬೇಸರಿಕೆಯ ರಂಗೋಲಿಯ ಬಿಡಿಸಿದವು ಆ ನೆನಪುಗಳು, ಸಾಕೆಂದರೂ ಛೇಡಿಸಿ ಮರೆಯಾದವು ಆ ನೆನಪುಗಳು. ಸರಿದ ಅನುಭವಗಳ ಅವಶೇಷಗಳಡಿಯಿಂದ, ಕದ್ದು ತರುವುದು , ಮರೆತ ಆ ಸುಂದರ ಕ್ಶಣವ. ತುಟಿಯಂಚಲಿ ನಗುವಾಗಿ , ವಿಶ್ವಾಸದ ಅಲೆಯಾಗಿ, ನಲಿಸುವುದು , ನಗಿಸುವುದು ನೊಂದ ಈ ಮನವ. ಏಕಾಂಗಿತನದ ಸಂಗಾತಿಯು ಈ ನೆನೆಪುಗಳು, ಏಕೀಕರಣಕೆ ಕಾರಣವೂ ಈ ನೆನೆಪುಗಳು. ನೆನಪಿರಲಿ , ಕಹಿ ನೆನಪುಗಳ ಹರಿವಿಗೆ ಕಡಿವಾಣವಿರಲಿ. ಸೊಗಸಾದ ಸಿಹಿ ನೆನಪುಗಳೆಂದೂ ಬತ್ತದಿರಲಿ.